Sale!

ಶ್ರೀ ಶಿರಡಿ ಸಾಯಿ ಪುಣ್ಯಚರಿತೆ ಪರಂಜ್ಯೋತಿ

370.00

ಸಾಯಿ ಭಕ್ತರಿಗೆ ನಮಸ್ಕಾರಗಳು 🙏

ಒಂದು ಸಂತೋಷದ ಸುದ್ದಿ! ಸಾಯಿ ದಿವ್ಯ ಚರಿತಾಮೃತವನ್ನು, ಸಾಯಿ ಮಹಾತ್ಮೆಯನ್ನು ತಾವೆಲ್ಲ ಓದಿದ್ದೀರಿ; ಕೇಳಿದ್ದೀರಿ! ಶಿರಡಿ ದರ್ಶನವಂತು ತಮಗೆಲ್ಲ ತುಂಬ ಸಾಮಾನ್ಯ ಮತ್ತು ಪವಿತ್ರವೆನಿಸಿದೆ.
ಕನ್ನಡದಲ್ಲಿ ಸಾಯಿ ಚರಿತೆಗಳು ಬೇಕಾದಷ್ಟು ಬಂದಿವೆ. ಸಾಕಷ್ಟು ಜನರು ಬರೆದಿದ್ದಾರೆ. ಆ ಎಲ್ಲವುಗಳ ಪೈಕಿ ಅತ್ಯಂತ ಅಧಿಕೃತವೂ ದಿವ್ಯಪ್ರದವೂ ಆದುದು ಮೈಸೂರಿನ ಶ್ರೀಮತಿ ಕೆ ಲಕ್ಷ್ಮಿಯವರು ಬರೆದಿರುವ -“ ಶ್ರೀ ಶಿರಡಿ ಸಾಯಿ ಪುಣ್ಯಚರಿತೆ ಪರಂಜ್ಯೋತಿ” ಎಂಬ ಗ್ರಂಥ!
ತುಂಬ ಸುಂದರ ಭಾಷೆಯಲ್ಲೂ ಎಲ್ಲವೂ ಅಧಿಕೃತ ಮಾಹಿತಿಗಳಿಂದಲೂ ಸಹಜವಾಗಿ ಎಂಬ ಶೈಲಿಯಲ್ಲಿ ಹೇಳುತ್ತ ಹೋಗಿರುವ ಈ ಚರಿತಾಮೃತವನ್ನು ಬರೆಯಲು ಪ್ರೇರಣೆ ಒದಗಿದ್ದೇ ಶ್ರೀ ಸಾಯಿಬಾಬಾ ಅವರ ದಿವ್ಯದರ್ಶನ ಹಾಗೂ ಆಶೀರ್ವಾದ ರೂಪದ ಪ್ರಸಾದಗಳಿಂದ. ಅದಕ್ಕೆ ಸಾಕ್ಷಿಯೆಂಬಂತೆ ಈ ಸುಮಾರು 600 ಪುಟಗಳ ಬೃಹತ್ ಗ್ರಂಥವು ರೂಪತಾಳಿಬಂದಿದೆ. ಈಗ ಸುಮಾರು 5-6 ವರ್ಷಗಳ ಹಿಂದೆ ಪ್ರಕಟಗೊಂಡಿದ್ದ ಈ ಗ್ರಂಥವು ಬಹುಬೇಗನೇ ಖಾಲಿಯಾಗಿ ಓದುಗರ – ಭಕ್ತರ ದೊಡ್ಡ ಬೇಡಿಕೆಗೆ ಕಾರಣವಾಗಿತ್ತು. ಅದನ್ನು ಮನಗಂಡು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನವು ತುಂಬು ಶ್ರದ್ಧೆಯಿಂದ ಅಚ್ಚುಕಟ್ಟಾಗಿ ಹೊರತರುತ್ತಿದೆ. ಈ ಕೆಲಸಕ್ಕೆ ಮುಖ್ಯ ಪ್ರೇರಕರೇ ಸಾಯಿ ಭಕ್ತರೂ ಪ್ರವಚನಕಾರರೂ ಸಾಯಿ ಮಹಾತ್ಮೆಯ ಎಲ್ಲ ಗ್ರಂಥಗಳನ್ನೂ ಅಧ್ಯಯನ ಮಾಡಿರುವವರೂ ಆಗಿರುವ ಶ್ರೀ ಸಾಯಿ ರಾಜೇಶ್ ಅವರು.2024 ರ ಜನವರಿ ಮೊದಲವಾರದಲ್ಲಿ ಹೊರಬರಲಿರುವ ಈ ಗ್ರಂಥದ ಬೆಲೆ ಕೇವಲ 495/- ರೂಪಾಯಿಗಳು. ಆದರೆ ಸಾಯಿ ಶ್ರೀಭಕ್ತರಿಗಾಗಿ ಜನವರಿ 5 2024 ರ ಒಳಗಾಗಿ ಮುಂಗಡ ಬುಕ್ ಮಾಡುವವರಿಗಾಗಿ ಮತ್ತೂ ದೊಡ್ಡ ರಿಯಾಯ್ತಿ ಬೆಲೆಯ ಅವಕಾಶ. ನಮ್ಮ ಸಾಹಿತ್ಯ ಪ್ರಕಾಶನದ ವೆಬ್ ಸ್ಟೋರಿನಲ್ಲಿ ಕೇವಲ 370/- ರೂಪಾಯಿಗಳಿಗೆ ಬುಕ್ ಮಾಡಬಹುದು.

Open chat
1
ನಮಸ್ತೆ.
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ...?

For Bulk Orders / Trade Discounts Call 9448110034