ಸ್ವಾತಂತ್ರ್ಯದ ಅಮೃತದ ಸಂಭ್ರಮಶುಭಾಶಯಗಳು!
ನಮ್ಮ ಸ್ವಾತಂತ್ರ್ಯಹೋರಾಟದ ಇತಿಹಾಸವೇ ಅತ್ಯಂತ ವೀರೋಚಿತವೂ ರೋಚಕವೂ ರೋಮಾಂಚಕಾರಿಯೂ ಆಗಿರುವುದು ಸುಳ್ಳಲ್ಲ! ನಮ್ಮ ದುರ್ದೈವದಿಂದಾಗಿ ನಿಜವಾದ ಸ್ವಾತಂತ್ರ್ಯಹೋರಾಟವನ್ನು ನಮಗೆ ತಿಳಿಸದೇ , ವಂಚಿಸಿ, ಸುಳ್ಳುಗಳನ್ನೇ ರಂಜಿಸಿ ಹೇಳಿದವರೇ ಹೆಚ್ಚು. ಪಠ್ಯಗಳಲ್ಲಿ ನಾವೆಲ್ಲ ಓದಿದ ಆರೆಂಟು ವ್ಯಕ್ತಿಗಳ ಹೋರಾಟದಿಂದಲೇ ಸ್ವಾತಂತ್ರ್ಯ ಲಭ್ಯವಾಯಿತೇ? ಸಾವಿರಾರು ವೀರರ ತ್ಯಾಗ, ಬಲಿದಾನಗಳ ಇತಿಹಾಸವೇ ಸುಳ್ಳೇ?
ನಮ್ಮ ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸವನ್ನು, ತಮ್ಮ ಆಳವಾದ ಅಧ್ಯಯನ, ಪ್ರವಾಸ, ಶೋಧನೆಗಳಿಂದ ನಿಖರವಾಗಿಯೂ ರೋಚಕವಾಗಿಯೂ ಬರೆಯಬಲ್ಲ , ಭಾರತೀಯ ಭಾಷೆಗಳಲ್ಲೇ ಪ್ರಮುಖ ಹೆಸರು ಪಡೆದವರು ಕನ್ನಡದ ಶ್ರೀ ಬಾಬು ಕೃಷ್ಣಮೂರ್ತಿಯವರು. ಅವರ ಒಂದೊಂದು ಬರಹದ ಸೊಗಸೇ ವಿಶಿಷ್ಟವಾದುದು. ಕಾದಂಬರಿಗಳಂತೂ ನಾಡಿನ ಓದುಗರೆಲ್ಲರ ಮನಸ್ಸನ್ನು ಆವರಿಸಿಕೊಂಡಂಥವೇ! ಇರಲಿ.
ಇತ್ತೀಚೆಗೆ ಅವರಿಂದ ರಚಿತವಾದ “ ಸ್ವಾತಂತ್ರ್ಯ ಹೋರಾಟದ ಹೀರೋಗಳು” ಎಂಬ ನಾಲ್ಕು ಸಂಪುಟಗಳು – ತುಂಬ ಉತ್ಕೃಷ್ಟ ಸಾಹಿತ್ಯ. ಮನೆಮನೆಯಲ್ಲಿರಬೇಕಾದವೂ ಮನೆಮಂದಿ ಎಲ್ಲರೂ ಓದಲೇಬೇಕಾದ ಅತ್ಯುತ್ತಮ ಕೃತಿಗಳವು! ಅವರಿವರಿಗೆ ಕಾಣಿಕೆ ಕೊಡಲೂ ( ತಾವು ಓದಿದಶಾಲೆಗೂ ಸಂಘಸಂಸ್ಥೆಗಳಿಗೂ) ಓದಲು ಪ್ರೇರೇಪಿಸಲೂ -ಈ ಅಮೃತ ಸಂದರ್ಭಕ್ಕಿಂತ ಬೇರೆ ಬೇಕೇ?
ಆದುದರಿಂದ, ನಮ್ಮಿಂದ ವಿಶೇಷ ಯೋಜನೆಯೊಂದು ರೂಪಗೊಂಡಿದೆ. ಶ್ರೀ ಬಾಬು ಕೃಷ್ಣಮೂರ್ತಿಯವರ ಈ ಮಾಲೆಯ ನಾಲ್ಕು ಸಂಪುಟಗಳ ಒಟ್ಟು ಮೌಲ್ಯ 1250/- ರೂಪಾಯಿಗಳು. ಈ ಆಗಸ್ಟ್ 31ರ ವರೆಗೆ , ಅದನ್ನು 1000/- ರೂಪಾಯಿಗಳಿಗೆ ತಮಗೆ ಪೂರೈಸಬೇಕೆಂದೂ, ಅದರ ರವಾನೆ ವೆಚ್ಚವನ್ನು ಪೂರ್ತಿಯಾಗಿ ನಾವೇ ಭರಿಸಬೇಕೆಂದೂ ನಿರ್ಧರಿಸಿದ್ದೇವೆ.
ಇಂಥ ಸಾಹಿತ್ಯದ ಸುಲಭ ಬೆಲೆಯ ವಿತರಣೆಯ ಮೂಲಕ ಸಾಹಿತ್ಯ ಪ್ರಕಾಶನದ – “ ಸ್ವಾತಂತ್ರ್ಯದ ಅಮೃತ ಸಂಭ್ರಮ” –
ತಮಗೂ ಮೆಚ್ಚಿಗೆಯಾದೀತಲ್ಲವೇ?